ಮೂಡುಬಿದಿರೆಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು.
ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ ಸೀತಾರಾಮಯ್ಯನವರ “ಕುರುಕ್ಷೇತ್ರಕ್ಕೊಂದು ಆಯೋಗ” ಕೃತಿ ಮಹಾಭಾರತದ ಜ್ಞಾನವುಳ್ಳವರಿಗೆ ಸಂಪೂರ್ಣ ಅರ್ಥವಾಗುವಂತಿತ್ತು, ಮತ್ತು ಅರೆ ಬರೆಯಾಗಿ ಗೊತ್ತಿರುವ ಮಂದಿಗೆ ಮಹಾಭಾರತದ ಪಾತ್ರಗಳ ಒಳಸಂವೇದನೆ, ತಪ್ಪು ಒಪ್ಪುಗಳ ಆಂತರಿಕ ತಾಕಲಾಟ, ತಪ್ಪೆಂದು ತಿಳಿದಿದ್ದೂ ಅದನ್ನು ಮಾಡಲೇಬೇಕಾಗಿದ್ದ ಅನಿವಾರ್ಯತೆಗಳೆಲ್ಲವನ್ನೂ ಬಿಚ್ಚಿಡುವಲ್ಲಿ, ಮಾತ್ರವಲ್ಲದೆ, ಕುರುಕ್ಷೇತ್ರ ಯುದ್ಧದ ಸೂತ್ರದಾರಿ ಶ್ರೀಕೃಷ್ಣ ಕೆಲವೆಡೆ ಕಪಟವಾಡಿದ್ದಾನೆ, ಅದು ಯಾಕೆ ಕಪಟವಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುವ ನಿಟ್ಟಿನಲ್ಲಿ ಈ ಯಕ್ಷರಂಗ ಪ್ರಯೋಗ ಪ್ರಯತ್ನಿಸಿತು.
ಮತ್ತಷ್ಟು ಓದಿ